ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧಾರವಾಡ.

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧಾರವಾಡ.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯ, ಧಾರವಾಡ.

ಭಾನುವಾರ, ಅಕ್ಟೋಬರ್ 27, 2013

ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..?

ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..?
***************************************
೧. ಕರು+ನಾಡು ( Ka. kara, karu greatness, abundance, power) = The Great Country ಇದನ್ನೆ ಸಂಸ್ಕ್ರುತೀಕರಿಸಿದರೆ ಕರ್+ನಾಟ => ಕರ್ನಾಟ =>ಕರ್ನಾಟಕ ( ಪುಲಿಕೇಶಿಯ ಕಾಲದಲ್ಲಿ ಕನ್ನಡ ನಾಡು ನರ್ಮದದಿಂದ ಕಾವೇರಿಯವರ್ಗೆ ಹಬ್ಬಿತ್ತು. ಆದ್ದರಿಂದ ಈಗಿನ ’ಮಹಾರಾಶ್ಟ್ರ’ದ ಹೆಸರು ಕೂಡ ’ಕರುನಾಡು’ ಎಂಬುದರ ಸಂಸ್ಕ್ರುತಾನುವಾದ ಎಂದು ಹೇಳಬಹುದು) ಎತ್ತುಗೆ : ’ಕರು’ ಪದ ಇನ್ನು ಬಳಕೆಯಲ್ಲಿದೆ ’ಕರುಮಾರಿಯಮ್ಮನ ಗುಡಿ’(ಮಹಾಮಾರಿಯಮ್ಮನ ಗುಡಿ) ಮಯ್ಸೂರು, ಬೆಂಗಳೂರಿನಲ್ಲಿ ಇಂದಿಗೂ ಇನ್ನೂ ಇವೆ. ೨. ಕರು+ ನಾಡು ಅಂದರೆ ಕಪ್ಪು ಮಣ್ಣಿನ ನಾಡು, ಕಪ್ಪು ಮಣ್ಣು ಹೆಚ್ಚಾಗಿ ಕಂಡು ಬರುತ್ತವೆ. ೩. ಕರು+ನಾಡು ಅಂದರೆ ಎತ್ತರದ ನಾಡು, ದಕ್ಕನ್ ಬೂವಿಯಲ್ಲಿ ನಮ್ಮ ನಾಡು ತಮಿಳುನಾಡಿಗೆ ಹೋಲಿಸಿದರೆ ಎತ್ತರದಲ್ಲಿದೆ. ೪. ಕಂನಾಡು = ಕನ್ನರ ನಾಡು (ಕನ್ನ=ಕರ್ಣ=ಕಂನ) ( ಇದಕ್ಕೆ ಶಂ.ಬಾ.ಜೋಶಿಯವರು ತಮ್ಮದೇ ಆದ ವಿವರಣೆ ಹೀಗೆ ಕೊಟ್ಟಿದ್ದಾರೆ:- ಕಳ್(ಹಾಲು) => ಕಳ್ಳಿ( ಹಾಲು ಸುರಿಸುವ ಗಿಡ) ಹೇಗೆ ನೊಳ=> ನೊಣ ಆಯಿತೊ ಹಾಗೆ ಕಳ್=>ಕನ್=>ಕನ್ನರು=>ಕಂನರು ಇವರ ನಾಡೇ ಕಂನಾಡು, ಇವರ ನುಡಿಯೇ ಕಂನುಡಿ ಮುಂದೆ ಇದೆ ಕಂನಾಡು/ಕಂನುಡಿ ಮಾರ್ಪಾಡಾಗಿ ನಾಡು-ನುಡಿಗೆ ’ಕನ್ನಡ’ ಎಂದಾಗಿದೆ ಎಂಬುದು ಅವರ ವಾದ. ಆದರೆ ಹಳೆಗನ್ನಡದ ಕಬ್ಬಗಳಲ್ಲಿ, ಕಲ್ಬರಹಗಳಲ್ಲಿ ’ಕರುನಾಡು’ ಎಂಬ ಪದ ಸಿಗುವುದಿಲ್ಲ. ’ಕನ್ನಡ’/ಕರ್ನಾಟ ಎಂಬುದಾಗಿ ಎಲ್ಲ ಕಡೆ ಸಿಗುತ್ತದೆ. ಎತ್ತುಗೆ: ಕವಿರಾಜಮಾರ್ಗದಲ್ಲಿ ಕೂಡ (’ಕಾವೇರಿಯಿಂದಂ ಗೋದಾವರಿವರಂ ಇರ್ಪ ನಾಡಾದ ’ಕನ್ನಡ’ದೊಳ್ ) ಕನ್ನಡ ಅಂತಾನೇ ಈ ನಾಡಿನ ಹೆಸರು ಅಂತಾ ಇದೆ. ಆದ್ದರಿಂದ ಶಂ.ಬಾ.ಜೋಶಿಯವರು ವಾದವನ್ನು ಒಪ್ಪಬಹುದು.’ಕನ್ನಡ’ ವೇ ಸಂಸ್ಕೃತಕ್ಕೆ ಹೋಗಿ ಕರ್ಣಾಟವಾಗಿದೆ ಅನ್ನುವುದರಲ್ಲಿ ಅನುಮಾನವಿಲ್ಲ. ಸಂಗೀತದಲ್ಲೂ ಕೂಡ ಈಗಲೂ ಬಳಕೆಯಲ್ಲಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ